Discussion about this post

User's avatar
Neelakanth Kulkarni's avatar

ಒಂದು ರೀತಿ ಚೆನ್ನಾಗಿದೆ. ನನಗನ್ನಿಸುವುದು, ಬದುಕಿನ ಬೇರೆ ಬೇರೆ ಮಗ್ಗುಲುಗಳು, ಸಂಗತಿಗಳು, ಹೊಳವುಗಳು ಇವೆಲ್ಲ ಎಲ್ಲ (ಒಳ್ಳೆಯ) ಕೃತಿಗಳಲ್ಲಿಯೂ ಉದ್ದೇಶಪೂರ್ವಕವಾಗಿಯೋ ಅಥವಾ ಅಲ್ಲದೆಯೋ ಬಂದೇ ಬರುತ್ತವೆ. ಅವಿಲ್ಲದೆ ಕೃತಿಯು ಅಸ್ಥಿಪಂಜರ ಮಾತ್ರ. ನಿಮ್ಮ ಈ ಮೇಲಿನ ಪರಿಚಯದಲ್ಲಿ ಕಾಣಿಸಿದ ತುಣುಕುತುಣುಕಾದ, ಆಗಸದ ಹಂಚಿ ಹರಡಿದ ಚುಕ್ಕಿಗಳಂತೆ, ಓದುಗಣ್ಣುಗಳ ಕಲ್ಪನೆಗೆ ದಕ್ಕಿದ ಚಿತ್ರ ಮೂಡಿಸುವ ಹರಹಿನಂತಹ ಬರೆವಣಿಗೆಯಲ್ಲಿ ಅವಕ್ಕೆ ನಿರ್ದಿಷ್ಟ ಸೂತ್ರತೆ ಇಲ್ಲದಿರುವಂತಹ ಹಂದರ, ತಂತ್ರ ಎಂಬಂತಹ ಅರ್ಥ ನನಗೆ ಮೂಡಿದ್ದು. ಅದನ್ನು ಗಮನಿಸಿದರೆ ನನಗೆ ಅನಿಸುವ ಮಟ್ಟಿಗೆ ಸಾಹಿತ್ಯದ ಭಾಗವಾಗಿ ಬರುವ ಸೂತ್ರತೆಯಿರದೇ ಅವೆಲ್ಲ ಒಕ್ಕಣಿಕೆಗಳು ಓದುಗನ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲಲು ಸಾಧ್ಯವೇ, ಸುಲಭವೇ ಎಂಬುದು ಸಂದೇಹ. ಹಾಗೆ ಮಾಡಬೇಕಾದರೆ ಅದರ ಫಾರ್ಮಿನಲ್ಲಿ ಎದ್ದುಕಾಣುವ ಅಂಶಗಳನ್ನು ತರಬೇಕಾಗುತ್ತದೆ. ಆ ಕೃತಿಯನ್ನು ಓದದೇ ನನಗೆ ಹೆಚ್ಚು ಬರೆಯಲು ಅಧಿಕಾರ ಕಾಣೆ. ನಿಮಗೆ ಏನಾದರೂ ಸ್ಪಷ್ಟತೆ ಕೊಡುವ ಸಾಧ್ಯತೆ ಇದ್ದರೆ ನೋಡಿ. (ಡಿಜಿಟಲ್ ಭಾಷೆಯ ಅಮೆನ್ ಇತ್ಯಾದಿ ಇಷ್ಟವಾದುವು..)

ಸಣ್ಣಾತಿಸಣ್ಣ ಎಂಬ ಪದ ನೋಡಿದೆ. ಕನ್ನಡ ಸಂಸ್ಕೃತಗಳ ಹಿತಕರವಲ್ಲದ ಸಮಾಹಾರವಾಯಿತು. ರೂಢಿಯಲ್ಲಿ ಇರುವುದೂ ಕಾಣಲಿಲ್ಲ.

No posts

Ready for more?