Discussion about this post

User's avatar
ಕೊನರು's avatar

ಚಂದದ ನಿರೂಪಣೆ. ನನ್ನ ಹಳೇ ಧಾರವಾಡ ನೋಡಿ ಧಂಗಾತು..

ಪಂ.ಚರಣಕರ್ ಮಂಗಳವಾರಪ್ಯಾಟಿ ಈರಣ್ಣನ ಗುಡಿ ಹತ್ರ ಇದ್ರು. ಆಮ್ಯಾಲ ಮನೀ ಕಟ್ಟಿಕೊಂಡ ಹೋದ್ರು. ಏರಿಯಾ ನೆನಪಿಲ್ಲ. -- Raynuka.

SREENATH M V's avatar

ಉಸ್ತಾದ್ ಫಯಾಜ್ ಖಾನ್ ರವರ ಮಾತುಗಳು ಓದುಗರನ್ನು ಧಾರವಾಡದ ಹಿಂದೂಸ್ತಾನಿ ಸಂಗೀತ ಲೋಕಕ್ಕೆ ಕರೆದೊಯ್ಯತ್ತವೆ. ಅವರ ಗಾಯನ ಮತ್ತು ಸಾರಂಗಿ ವಾದನ ಕೂಡ ಉನ್ನತ ಮಟ್ಟದವು. ನಾನು ಮೊದಲಿಗೆ ಅವರ ದನಿಯನ್ನು ಕೇಳಿದ್ದು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ "ಅರ್ಧ ಸತ್ಯ" ಧಾರಾವಾಹಿಯಲ್ಲಿ. ಅಂದಿನಿಂದ ಅವರ ಕಂಠಸಿರಿಗೆ ಮಾರುಹೋದವ ನಾನು. ಬಳಿಕ ಅವರ ಕಂಠದಿಂದ ದಾಸರ ಪದಗಳನ್ನು ಹಿಂದೂಸ್ತಾನಿ ಗಾಯನವನ್ನು ಕೇಳಿರುವೆ. ಅವರ ಸಾರಂಗಿ ವಾದನ ಕೂಡ ಬಲು ಸೊಗಸು. ಅವರೇ ಸಂದರ್ಶನವೊಂದರಲ್ಲಿ ಹೇಳಿದಂತೆ ಸಾರಂಗಿ ಕಲಿಯಲು ದೂರದ ಮುಂಬೈಗೆ ಹೋಗಿ ಬರುತ್ತಿದ್ದರಂತೆ. ಸಾಧಕರೇ ಹಾಗೆ. ಎಷ್ಟೇ ಅಡ್ಡಿ ಆತಂಕಗಳಿದ್ದರೂ ಛಲ ಬಿಡರು. ಸಾಧನೆಯ ಶಿಖರವನ್ನು ಸಾಹಸದಿಂದ ಏರಿಬಿಡುವರು. ಮಹಾನ್ ಸಾಧಕರುಗಳಲ್ಲಿ ಫಯಾಜ್ ಖಾನ್ ಮೇರು ಶಿಖರ.

No posts

Ready for more?